Home ಕರ್ನಾಟಕ ಕರಾವಳಿ ಜೈನಮುನಿ ಹತ್ಯೆ ಆದ್ಯಾತ್ಮ ಜಗತ್ತಿನ ಮೇಲಾದ ದೊಡ್ಡ ಆಘಾತ: ಕೇಮಾರು ಶ್ರೀ

ಜೈನಮುನಿ ಹತ್ಯೆ ಆದ್ಯಾತ್ಮ ಜಗತ್ತಿನ ಮೇಲಾದ ದೊಡ್ಡ ಆಘಾತ: ಕೇಮಾರು ಶ್ರೀ

0
ಜೈನಮುನಿ ಹತ್ಯೆ ಆದ್ಯಾತ್ಮ ಜಗತ್ತಿನ ಮೇಲಾದ ದೊಡ್ಡ ಆಘಾತ: ಕೇಮಾರು ಶ್ರೀ

ಉಡುಪಿ: ಸೌಮ್ಯ ಸ್ವಭಾವದ ಜೈನಮುನಿ ನಂದಿ ಮಹಾರಾಜ ಸ್ವಾಮೀಜಿಯವರ ಹತ್ಯೆ ಆದ್ಯಾತ್ಮ ಜಗತ್ತಿನ ಮೇಲಾಂದತಹ ದೊಡ್ಡ ಆಘಾತ. ಹಂತಕರನ್ನು ಶೀಘ್ರವೇ ಬಂಧಿಸಿ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಕೇಮಾರು ಈಶವಿಠಲ ಸ್ವಾಮೀಜಿ ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜೈನಮುನಿ ಹತ್ಯೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಇಂತಹ ಹೇಯ ಕೃತ್ಯ ಇತಿಹಾಸದಲ್ಲೇ ಮೊದಲ ಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಜೈನ ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಇನ್ನು, ಹಿರೇಕೋಡಿಯ ಜೈನಮುನಿ ಹತ್ಯೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಂತ್ರಿ ಸಿದ್ದರಾಮಯ್ಯ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here