Home ಕರ್ನಾಟಕ ಕರಾವಳಿ ಹೃದಯಾಘಾತದಿಂದ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್ ನಿಧನ: ಕಂಬನಿ ಮಿಡಿದ ಸ್ಥಳೀಯರು

ಹೃದಯಾಘಾತದಿಂದ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್ ನಿಧನ: ಕಂಬನಿ ಮಿಡಿದ ಸ್ಥಳೀಯರು

0
ಹೃದಯಾಘಾತದಿಂದ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್ ನಿಧನ: ಕಂಬನಿ ಮಿಡಿದ ಸ್ಥಳೀಯರು

ಮಂಗಳೂರು: ಹೃದಯಾಘಾತದಿಂದ ಮಂಗಳೂರು ಸಶಸ್ತ್ರ ಮೀಸಲು ಪಡೆಯ ಹೆಡ್‌ ಕಾನ್‌ಸ್ಟೆಬಲ್ ಮೃತಪಟ್ಟಿರುವ ಘಟನೆ ಪಾಂಡೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.‌
ಸೋಮನಗೌಡ ಚೌಧರಿ(31) ಮೃತ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್. ಪೊಲೀಸ್‌ ವಾಹನ ಚಾಲಕರಾಗಿದ್ದ ಇವರು ತಮ್ಮ ಮೇಲಾಧಿಕಾರಿಯೊಬ್ಬರಿಗೆ ಜ್ವರ ಬಂದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಬಿಟ್ಟು ಜೀಪ್‌ ಬಳಿ ಬಂದಾಗ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಂದು ಮಂಗಳೂರಿನಲ್ಲಿ ಸೋಮನಗೌಡ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಇವರ ಸಾವಿಗೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here