Home ಕರ್ನಾಟಕ ಕರಾವಳಿ ರಾಘವೇಂದ್ರ ಶೇರುಗಾರ್‌ ಕೊಲೆ ಪ್ರಕರಣ:ಶಿವಮೊಗ್ಗ ಮೂಲದ ಇಬ್ಬರು ಅರೆಸ್ಟ್

ರಾಘವೇಂದ್ರ ಶೇರುಗಾರ್‌ ಕೊಲೆ ಪ್ರಕರಣ:ಶಿವಮೊಗ್ಗ ಮೂಲದ ಇಬ್ಬರು ಅರೆಸ್ಟ್

0
ರಾಘವೇಂದ್ರ ಶೇರುಗಾರ್‌ ಕೊಲೆ ಪ್ರಕರಣ:ಶಿವಮೊಗ್ಗ ಮೂಲದ ಇಬ್ಬರು ಅರೆಸ್ಟ್

ಕುಂದಾಪುರ: ರಾಘವೇಂದ್ರ ಶೇರುಗಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದವರು ಎನ್ನಲಾದ ಇಬ್ಬರು ಆರೋಪಿಗಳನ್ನು ಗುರುವಾರ ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ರವಿವಾರ ಸಂಜೆ ಸುಮಾರಿಗೆ ತಮ್ಮ ಕಾರಿನಲ್ಲಿ ಕುಂದಾಪುರದ ಚಿಕನ್‌ ಸಾಲ್‌ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕಾರು ಸೈಡ್‌ ಕೊಡುವ ವಿಚಾರದಲ್ಲಿ ತಗಾದೆ ತೆಗೆದು, ಬಳಿಕ ರಾಘವೇಂದ್ರ ಅವರ ತೊಡೆಗೆ ಚೂರಿ ಇರಿದು ಪರಾರಿಯಾಗಿದ್ದನು. ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡ ರಚಿಸಿದ್ದ ಉಡುಪಿ ಎಸ್‌.ಪಿ ಡಾ.ಅರುಣ್‌ ಕೆ, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು.
ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಹಾಗೂ ಇತರ ಪ್ರಮುಖ ದಾಖಲೆಗಳನ್ನು ಕಲೆ ಹಾಕಿದ ಪೊಲೀಸರು ಶಿವಮೊಗ್ಗ ಬೆಂಗಳೂರು ಸಹಿತ ವಿವಿದೆಡೆ ತೆರಳಿ ಆರೋಪಿಗಳ ಹಡುಕಾಟ ನಡೆಸಿದ್ದರು. ಇದೀಗ ಪೊಲೀಸರ ಒಂದು ತಂಡ ಶಿವಮೊಗ್ಗ ಮೂಲದವರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿಚಾರಣೆ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಹೊರಬರಬೇಕಿದೆ.

 

LEAVE A REPLY

Please enter your comment!
Please enter your name here