
ಉಡುಪಿ: ಭಾವಿ ಪರ್ಯಾಯ ಪೀಠವನ್ನೇರಲಿರುವ ಪರಮಪೂಜ್ಯ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭ ದೇವರ ದರ್ಶನ ಮಾಡಿದರು. ಅಂಬಲಪಾಡಿ ಲಕ್ಷ್ಮೀಜನಾರ್ಧನ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ವಿಜಯ ಬಲ್ಲಾಳ್ ಅವರು ಸ್ವಾಗತಿಸಿ, ಗೌರವಾರ್ಪಣೆ ಮಾಡಿದರು.
