
ಮಂಗಳೂರು: ಯಶ ವಿಶೇಷ ಆಟಿಸಂ ಮಕ್ಕಳ ತರಬೇತಿ ಕೇಂದ್ರ ಇದರ ವಾರ್ಷಿಕೋತ್ಸವ ಕಾರ್ಯ್ರಮವನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ವೈ ಶೆಟ್ಟಿ ಅವರು ಉದ್ಘಾಟಿಸಿದರು.
ದೈಹಿಕ ನ್ಯೂನತೆ ಹೊಂದಿರುವವರು ನಿಷ್ಕಲ್ಮಶ ಮನಸ್ಸಿನವರಾಗಿರುವುದರಿಂದ ದೇವರ ಮಕ್ಕಳೆಂದು ತಿಳಿಯಲಾಗುತ್ತದೆ. ಸಮಾಜದ ಯಾವ ವ್ಯಕ್ತಿಯು ಇಂತಹ ಮಕ್ಕಳನ್ನು ಅಸಡ್ಡೆಯಿಂದ ಕಾಣದೆ ಎಲ್ಲರಂತೆ ಪ್ರೀತಿಯಿಂದ ಆದರಿಸಬೇಕೆಂದರು.
ಎಲ್ಲಾ ಅಂಗಾಂಗಳು ಸರಿಯಾಗಿರುವ ವ್ಯಕ್ತಿಗಳೇ ಮಾದಕ ವ್ಯಸನಕ್ಕೆ ಬಲಿಯಾಗಿ ಸಮಾಜಕ್ಕೆ ಕಂಠಕರಾಗುತ್ತಿರುವ ಈ ಕಾಲಘಟ್ಟದಲ್ಲಿ ವಿಶೇಷ ಚೇತನ ಮಕ್ಕಳು ಸಮಾಜದಲ್ಲಿ ಏನನ್ನಾದರೂ ಸಾಧಿಸುವ ಹಠ ಹೊಂದಿರುವುದು ಪ್ರಶಂಶನೀಯ ಎಂದು ನುಡಿದರು. ಈ ಸಂದರ್ಭದಲ್ಲಿ ಯಶ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು ಮೊದಲಾದವರಿದ್ದರು.
