Home ಸುದ್ದಿಗಳು ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

0
ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕೋರ್ಟ್ ನ ಆದೇಶದ ಪ್ರತಿ ಸಿಕ್ಕಿಲ್ಲ. ಪೂರ್ಣ ಓದಿದ ಮೇಲೆ ರಿಯಾಕ್ಟ್ ಮಾಡ್ತೀನಿ. ತನಿಖೆ ಎದುರಿಸಲು ತಯಾರಿಗಿದ್ದೇವೆ. ವಕೀಲರ ಜೊತೆ ಚರ್ಚೆ ಮಾಡ್ತೀನಿ. ತನಿಖೆಗಳಿಗೆ ಹೆದರಲ್ಲ ಎಂದರು.

ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡ್ತೀವಿ.ಕೇರಳ ಪ್ರವಾಸಕ್ಕೆ ಹೋಗ್ತಿದ್ದೇನೆ. ಆದೇಶದ ಪ್ರತಿ ಪೂರ್ಣ ಓದಿದ ಬಳಿಕ ನಾಳೆ ಬೆಳಗ್ಗೆ ಸಂಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ನಿನ್ನೆ ಹೈಕೋರ್ಟ್‌ನಲ್ಲಿ ಆದೇಶ ಆಯ್ತು, ತನಿಖೆ ಮಾಡಿ ಅಂತಾ ಹೇಳಿದ್ದಾರೆ. ಅದರ ಅನ್ವಯ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ ಮಾಡಿದ್ದಾರೆ. ಪೂರ್ಣ ಆದೇಶ ನೋಡಿದ ಮೇಲೆ ಪ್ರತಿಕ್ರಿಯೆ ನೀಡ್ತೀನಿ ಎಂದರು.

 

LEAVE A REPLY

Please enter your comment!
Please enter your name here