
ಕೊಲ್ಲೂರು: ಕಾಂತಾರ-1 ಚಿತ್ರ ತಂಡದ ವಾಹನ ಅಪಘಾತ ನಡೆದ ಘಟನೆ ನಡೆದಿದೆ.
ಹಾಲ್ಕಲ್ನ ಆನೆಝರಿ ಎನ್ನುವಲ್ಲಿ ಕಾಂತಾರ-1 ಚಿತ್ರ ತಂಡದ ಮಿನಿ ಬಸ್ ಗೆ ಸ್ಕೂಟರ್ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸುವ ಭರದಲ್ಲಿ ವಾಹನ ರಸ್ತೆ ಪಕ್ಕಕ್ಕೆ ಸರಿದಿದೆ.
ವಾಹನದಲ್ಲಿ ಕಾಂತಾರ-1 ಚಿತ್ರ ತಂಡದ ತಾಂತ್ರಿಕ ವಿಭಾಗದವರು ಮತ್ತು ಸಹಕಲಾವಿದರು ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ.
ಮಿನಿಬಸ್ ಚಾಲಕನ ನಿರ್ಲಕ್ಷ್ಯ ಆರೋಪಿಸಿ ಚಾಲಕ ಮತ್ತು ಅದರಲ್ಲಿದ್ದ ಸಹ ಕಲಾವಿದರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
