
ಉಡುಪಿ: ಉಡುಪಿ ಟಿಪಿಪಿಯ ಅದಾನಿ ಫೌಂಡೇಷನ್ ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ 17 ಲಕ್ಷ ರೂ. ವೆಚ್ಚದ 4 ರಸ್ತೆಗಳ ಅಭಿವದ್ಧಿಗೆ ಮುಂದಾಗಿದೆ.
ಅದಾನಿ ಸಮೂಹವು ಸ್ಥಾವರದ ಸುತ್ತಲಿನ 7 ಗ್ರಾ.ಪಂ. ಗಳ ಮೂಲ ಸೌಕರ್ಯ ಅಭಿವೃದ್ಧಿಗೆ 22.73 ಕೋಟಿ ರೂ. ಅನುದಾನವನ್ನು ಸಿಎಸ್ಆರ್ ಯೋಜನೆಯಲ್ಲಿ ಘೋಷಿಸಿದೆ. ಆಯಾ ಗ್ರಾ.ಪಂ.ಗಳ ವಾರ್ಷಿಕ ಕ್ರಿಯಾಯೋಜನೆ ಪ್ರಕಾರ ಅನುಷ್ಠಾನಿಸಲಾಗುತ್ತಿದೆ.
ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಹಾಗೂ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ್ ರಾವ್ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿದರು.
ಈವರೆಗೆ ಸುಮಾರು 13 ಕೋಟಿ ರೂ. ವೆಚ್ಚದ ಸೌಕರ್ಯ ಕಲ್ಪಿಸಲಾಗಿದೆ ಎಂದು ಕಿಶೋರ್ ಆಳ್ವ ಹೇಳಿದರು.
ಅದಾನಿ ಸಮೂಹವು ಎಲ್ಲೂರು ಗ್ರಾ. ಪಂ. ವ್ಯಾಪ್ತಿಯ 78 ಮೀ. ಉದ್ದದ ಮಾಣಿಯೂರು ಮಠ ರಸ್ತೆ, 78 ಮೀ. ಕೃಷ್ಣ ನರ್ಸರಿ ರಸ್ತೆ, 100 ಮೀ. ಪಿಲಿಚಂಡಿ ರಸ್ತೆ, 95 ಮೀ. ಉಳ್ಳೂರು ರಸ್ತೆಗಳ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ.
