
ಮಂಗಳೂರು: ಜ. 21ರಿಂದ ಮಂಗಳೂರು-ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ಮುಂದೂಡುವ ಸೂಚನೆ ಕಂಡುಬಂದಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ನಿರ್ವಹಣ ಕಾರಣಗಳಿಗಾಗಿ ಇದನ್ನು ಕೆಲವು ದಿನಗಳ ಕಾಲ ಮುಂದೂಡಿದೆ.
ಜ. 21ರಿಂದ ಆರಂಭಗೊಳ್ಳಲಿದ್ದ ವಿಮಾನಯಾನಕ್ಕೆ ಬುಕಿಂಗ್ ತೆರೆಯಲಾಗಿತ್ತು, ಆದರೆ ನಿರೀಕ್ಷಿತ ಮಟ್ಟದಲ್ಲಿ ಬುಕಿಂಗ್ ಇಲ್ಲದ ಕಾರಣ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲಾಗುತ್ತಿದೆ.
ನೇರ ವಿಮಾನ ಹಾರಾಟದ ಬದಲಾಗಿ ಮಧುರೈ ಅಥವಾ ತಿರುಚ್ಚಿ ಮೂಲಕ ಸಿಂಗಾಪುರಕ್ಕೆ ತೆರಳುವುದಾದರೆ ಹೆಚ್ಚಿನ ಪ್ರಯಾಣಿಕರು ಸಿಗಬಹುದು ಎನ್ನುವ ಬಗ್ಗೆ ಏರ್ಇಂಡಿಯಾ ಎಕ್ಸ್ಪ್ರೆಸ್ ಯೋಚಿಸುತ್ತಿರುವುದಾಗಿ ತಿಳಿದು ಬಂದಿದೆ.
