Home ಸುದ್ದಿಗಳು ಮಹಾಕುಂಭಮೇಳದಲ್ಲಿ ಪಲಿಮಾರು ಶ್ರೀಪಾದರ ಮೊಕ್ಕಾಂ

ಮಹಾಕುಂಭಮೇಳದಲ್ಲಿ ಪಲಿಮಾರು ಶ್ರೀಪಾದರ ಮೊಕ್ಕಾಂ

0
ಮಹಾಕುಂಭಮೇಳದಲ್ಲಿ ಪಲಿಮಾರು ಶ್ರೀಪಾದರ ಮೊಕ್ಕಾಂ

ಉಡುಪಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ತೀರ್ಥಸ್ನಾನ ಮಾಡಿದರು.

ಶ್ರೀಪಾದರು ಶಿಷ್ಯವರ್ಗದೊಂದಿಗೆ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ಅವರು ಸುಮಾರು 1 ತಿಂಗಳು ಅಲ್ಲಿದ್ದು, ಪ್ರವಚನ ನಡೆಸಲಿದ್ದಾರೆ. ಗಂಗಾನದಿ ತಟದಲ್ಲಿ ಹಾಕಿರುವ ಟೆಂಟ್‌ನಲ್ಲಿ ಶ್ರೀಪಾದರು ಮೊಕ್ಕಾಂ ಹೂಡಿದ್ದಾರೆ.

ಜ.24ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಹಾಕುಂಭಮೇಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮಠದ ಮೂಲಗಳು ತಿಳಿಸಿವೆ.

 

LEAVE A REPLY

Please enter your comment!
Please enter your name here