
ಪ್ರಯಾಗ್ರಾಜ್: ಇಂದು ವಸಂತ ಪಂಚಮಿಯ ಪವಿತ್ರ ದಿನವಾಗಿದ್ದು, ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಭಕ್ತರು ಮೂರನೇ ಅಮೃತ ಪುಣ್ಯಸ್ನಾನ ಮಾಡಿದ್ದಾರೆ.
ಕುಂಭಮೇಳದಲ್ಲಿ ಬೆಳಗಿನ ಜಾವವೇ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಬೂದಿ ಹಚ್ಚಿದ ನಾಗ ಸಾಧುಗಳು ಸ್ನಾನ ಮಾಡಿದರು. ನಂತರ ಇತರ ಭಕ್ತರು ಸ್ನಾನ ಮಾಡುವುದರೊಂದಿಗೆ ಆಚರಣೆ ಪ್ರಾರಂಭವಾಯಿತು.
ಮುಂಜಾನೆ 4 ಗಂಟೆ ಹೊತ್ತಿಗೆ 16 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕುಂಭಮೇಳದಲ್ಲಿ ನಡೆಯುವ ಪವಿತ್ರ ಶಾಹಿಸ್ನಾನದಲ್ಲಿ ವಸಂತ ಪಂಚಮಿ ಪ್ರಮುಖವಾಗಿದೆ. ಫೆ.12 ರಂದು ಮಹಾ ಪೂರ್ಣಿಮೆ ಮತ್ತು ಫೆ.26 ರಂದು ಮಹಾ ಶಿವರಾತ್ರಿ ದಿನ ಕೊಲೆ ಪುಣ್ಯ ಸ್ನಾನ ನೆರವೇರಲಿದೆ.
ಇಂದು ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.
