Home ಕರಾವಳಿ ಉಡುಪಿ ಕೃಷ್ಣಮಠಕ್ಕೆ ಚಿತ್ರನಟಿ ಸಾಯಿ ಪಲ್ಲವಿ ಭೇಟಿ

ಉಡುಪಿ ಕೃಷ್ಣಮಠಕ್ಕೆ ಚಿತ್ರನಟಿ ಸಾಯಿ ಪಲ್ಲವಿ ಭೇಟಿ

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಚಿತ್ರನಟಿ ಸಾಯಿ ಪಲ್ಲವಿ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಚಿತ್ರನಟಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು.

ಈ ಸಂದರ್ಭ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

 
Previous articleಕುಡಿದ ಮತ್ತಿನಲ್ಲಿ ಇನ್ಮುಂದೆ ಗಾಡಿ ಚಲಾಯಿಸಿದ್ರೆ ನಿಮಗಿದೆ ಈ ಕಠಿಣ ಕ್ರಮ
Next articleಪುತ್ತಿಗೆ ಪರ್ಯಾಯ: ನಾಳೆಯಿಂದ ಬೆಂಗಳೂರಿನಲ್ಲಿ ಗೀತೋತ್ಸವ