
ಎಡಪದವು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ರೈತ ಮೋರ್ಚ ಇದರ ಆಶ್ರಯದಲ್ಲಿ ಭಾರತೀಯ ಜನತಾಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇದರ ಸಹಭಾಗಿತ್ವದಲ್ಲಿ ವನ ಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಮಂಗಳವಾರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಗೋಳಿದಡಿ, ಎಡಪದವಿನಲ್ಲಿ ಜರುಗಿತು.
ಶಾಸಕರಾದ ಡಾ॥ ಭರತ್ ಶೆಟ್ಟಿ ವೈ.,ಕಾರ್ಯಕ್ರಮವನ್ನು ಉದ್ಘಾಟಿಸಿ, ಪರಿಸರ ಸಹ್ಯ ವಾತಾವರಣವಿದ್ದಾಗ ಜನರು ಆರೋಗ್ಯಪೂರ್ಣವಾಗಿ ಬಾಳಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಸ್ವಚ್ಛ, ಹಸಿರು, ಶುದ್ಧ ಗಾಳಿಯನ್ನು ಹೊಂದುವಂತಾಗಲು ಈ ಮೂಲಕ ಪರಿಸರ ಉಳಿಸಲು ಪ್ರತಿಜ್ಞೆ ತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುರಳೀಧರ ಶೆಟ್ಟಿ ಮಾರ್ಗದರ್ಶಕರು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಎಡಪದವು, ಸುಕೇಶ್ ಮಾಣ್ಯಾ ತಲಕಳ ಕೊಳಂಬೆ, ಅಧ್ಯಕ್ಷರು- ರೈತ ಮೋರ್ಚ ಮಂಗಳೂರು ನಗರ ಉತ್ತರ ಮಂಡಲ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶೋಧನ್ ಅದ್ಯಪಾಡಿ, ಮಹಾಬಲ ಪೂಜಾರಿ ಮಂಡಲ ಉಪಾಧ್ಯಕ್ಷ ಸೋಹನ್ ಅತಿಕಾರಿ, ಪಂಚಾಯತ್ ಅಧ್ಯಕ್ಷರುಗಳಾದ ಅನುಸೂಯ ಭಂಡಾರಿ, ಪ್ರವೀಣ್ ಆಳ್ವ, ಶಾಲಿನಿ ಕಂದಾವರ, ನಾರಾಯಣ ಪೂಜಾರಿ ಮುಚ್ಚೂರು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ್ ಎಡಪದವು, ಸೋಹನ್ ಆಳ್ವ ಮಲ್ಲೂರು, ಬಿಜೆಪಿ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.
