Home ಸುದ್ದಿಗಳು ರಾಜ್ಯ ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ ನಟನಿಗೆ ಅಪಘಾತ: ಬಲಗಾಲನ್ನು ಕತ್ತರಿಸಿದ ವೈದ್ಯರು

ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ ನಟನಿಗೆ ಅಪಘಾತ: ಬಲಗಾಲನ್ನು ಕತ್ತರಿಸಿದ ವೈದ್ಯರು

0
ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ ನಟನಿಗೆ ಅಪಘಾತ: ಬಲಗಾಲನ್ನು ಕತ್ತರಿಸಿದ ವೈದ್ಯರು

ಗುಂಡ್ಲುಪೇಟೆ: ಬೈಕ್ ಮತ್ತು ಟಿಪ್ಪರ್‌ ನಡುವೆ ಡಿಕ್ಕಿಯಾಗಿ ಬೈಕ್‌ ಸವಾರನ ಕಾಲಿಗೆ ಪೆಟ್ಟಾಗಿರುವ ಘಟನೆ ಬೇಗೂರಿನಲ್ಲಿ ನಡೆದಿದೆ. ಪಾರ್ವತಮ್ಮ ರಾಜ್‌ಕುಮಾರ್‌ ತಮ್ಮನ ಮಗ ನಟ ಸೂರಜ್‌ ಅಪಘಾತಕ್ಕೀಡಾದ ಬೈಕ್‌ ಸವಾರ. ಅಪಘಾತದಲ್ಲಿ ನಟ ಸೂರಜ್‌ ಕಾಲಿಗೆ ತೀವ್ರವಾಗಿ ಪೆಟ್ಟು ಬಿದ್ದಿರುವ ಹಿನ್ನೆಲೆ ಅವರ ಬಲಗಾಲನ್ನು ಕತ್ತರಿಸಲಾಗಿದೆ ಎಂದು ವರದಿಯಾಗಿದೆ.
ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಲಾರಿಯೊಂದು ಮೈಸೂರು ಕಡೆಯಿಂದ ಬರುತ್ತಿದ್ದ ನಟ ಸೂರಜ್‌ ಅವರ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸೂರಜ್‌ ಅವರ ಕಾಲಿನ ಮೇಲೆ ಟಿಪ್ಪರ್‌ ಹರಿದಿದ್ದು, ಈ ವೇಳೆ ಅವರ ಬಲಗಾಲು ಸಂಪೂಣವಾಗಿ ನುಜ್ಜುಗುಜ್ಜಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರ ಬಲಗಾಲನ್ನು ಕತ್ತರಿಸಲಾಗಿದೆ. ಪ್ರಸ್ತುತ ಅವರಿಗೆ ಐಸಿಯುವಿನಲ್ಲಿಟ್ಟು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್‌ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

 

LEAVE A REPLY

Please enter your comment!
Please enter your name here