Home ಸಿನೆಮಾ ಹಿಂದುಳಿದ ಮಕ್ಕಳಿಗಾಗಿ ಆದಿಪುರುಷ್‌ ಚಿತ್ರದ 10 ಸಾವಿರ ಟಿಕೆಟ್‌ ಕಾಯ್ದಿರಿಸಿದ ಬಾಲಿವುಡ್‌ ನಟ

ಹಿಂದುಳಿದ ಮಕ್ಕಳಿಗಾಗಿ ಆದಿಪುರುಷ್‌ ಚಿತ್ರದ 10 ಸಾವಿರ ಟಿಕೆಟ್‌ ಕಾಯ್ದಿರಿಸಿದ ಬಾಲಿವುಡ್‌ ನಟ

0
ಹಿಂದುಳಿದ ಮಕ್ಕಳಿಗಾಗಿ ಆದಿಪುರುಷ್‌ ಚಿತ್ರದ 10 ಸಾವಿರ ಟಿಕೆಟ್‌ ಕಾಯ್ದಿರಿಸಿದ ಬಾಲಿವುಡ್‌ ನಟ

ನವದೆಹಲಿ: ನಟ ಪ್ರಭಾಸ್‌ಅವರ ಬಹುನಿರೀಕ್ಷಿತ ಆದಿಪುರುಷ್‌ ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತ್ತು. ಇದಕ್ಕಾಗಿ ಇತಿಹಾಸದಲ್ಲೇ ಅತಿದೊಡ್ಡ ಸೆಟ್‌ ಅನ್ನು ನಿರ್ಮಾಣ ಮಾಡಿ ಕೋಟಿಗಟ್ಟಲೆ ಖರ್ಚುಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಸಲಾಗಿತ್ತು. ಇದೀಗ ಈ ಸಿನಿಮಾಗೆ ಬಾಲಿವುಡ್‌ ನಟರೋರ್ವರಿಂದ ಉತ್ತಮ ಸಹಕಾರ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ರಿಲೀಸ್‌ ಆಗಲಿರುವ ಈ ಸಿನಿಮಾ ನೋಡಲು 10,000 ಟಿಕೆಟ್‌ ಗಳನ್ನು ಕಾಯ್ದಿರಿಸಲಿದ್ದಾರೆ.
ಹೌದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿರುವ ಈ ಸಿನಿಮಾ ಸದ್ಯದಲ್ಲೇ ತೆರೆಮೇಲೆ ಬರಲು ಸಜ್ಜಾಗಿದೆ. ಈ ಹಿನ್ನೆಲೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅವರು ಸಿನಿಮಾ ನೋಡಲು 10,000 ಟಿಕೆಟ್‌ ಗಳನ್ನು ಈಗಾಗಲೇ ಬುಕ್ಕಿಂಗ್‌ ಮಾಡಿದ್ದಾರೆ. ಹಿಂದುಳಿದ ಮಕ್ಕಳಿಗೆ ಈ ಸಿನಿಮಾವನ್ನು ತೋರಿಸುವ ಸಲುವಾಗಿ ಟಿಕೆಟ್‌ ಕಾಯ್ದಿರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ, ತೆಲಂಗಾಣದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ 10,000 ಉಚಿತ ಟಿಕೆಟ್‌ಗಳನ್ನು ನೀಡಲು ನಿಮಾಪಕ ಅಭಿಷೇಕ್‌ ಅಗರ್ವಾಲ್‌ ಮುಂದಾಗಿದ್ದಾರೆ. ಇದಕ್ಕಾಗಿ ಆಸಕ್ತರು ತಂಡವು ಒದಗಸಿದ ಗೂಗಲ್‌ಫಾರ್ಮ್ಅನ್ನು ಭರ್ತಿ ಮಾಡಬೇಕು.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್‌ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಜೂನ್‌ 16ರಂದು ತೆರೆಕಾಣಲಿರುವ ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಲಿದೆ.

 

LEAVE A REPLY

Please enter your comment!
Please enter your name here