Home ಸುದ್ದಿಗಳು ರಾಜ್ಯ ಪಡಿತರರ ಚೀಟಿದಾರರಿಗೆ 5ಕೆಜಿ ಅಕ್ಕಿ ಬದಲಿಗೆ ಹಣ: ಸರ್ಕಾರದ ಮಹತ್ವದ ನಿರ್ಧಾರ

ಪಡಿತರರ ಚೀಟಿದಾರರಿಗೆ 5ಕೆಜಿ ಅಕ್ಕಿ ಬದಲಿಗೆ ಹಣ: ಸರ್ಕಾರದ ಮಹತ್ವದ ನಿರ್ಧಾರ

0
ಪಡಿತರರ ಚೀಟಿದಾರರಿಗೆ  5ಕೆಜಿ ಅಕ್ಕಿ ಬದಲಿಗೆ ಹಣ: ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಚುನಾವಣಾ ಸಂದರ್ಭ 5 ಗ್ಯಾರಂಟಿಗಳನ್ನು ನೀಡಿತ್ತು. ಅವುಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿ ಪಡಿತರ ಚೀಟಿದಾರರಿಗೆ ತಲಾ 10ಕೆಜಿ ಅಕ್ಕಿಯನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸಕಾರ ಅಕ್ಕಿ ಪೂರೈಕೆ ಮಾಡುತ್ತಿಲ್ಲ ಎಂದು ರಾಜ್ಯ ಸಕಾರ ಆರೋಪ ಮಾಡುತ್ತಿದೆ. ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಕಾಂಗ್ರೆಸ್‌ ಸಕಾರ ಈ ಯೋಜನೆಯಡಿ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ.
ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿಧಾರವನ್ನು ಕೈಗೊಳ್ಳಲಾಗಿದ್ದು, 10ಕೆಜಿ ಉಚಿತ ಅಕ್ಕಿ ನೀಡಲು ಸಮಸ್ಯೆಯುಂಟಾಗಿರುವುದರಿಂದ 5 ಕೆಜಿ ಅಕ್ಕಿ ಬಲಿಗೆ ಹನ ನೀಡುವುದಾಗಿ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಸಚಿವ ಮುನಿಯಪ್ಪ, ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್‌ ಪಡಿತರ ಕಾಡುದಾರರಿಗೆ ಮಾಸಿಕ ತಲಾ 170ರೂ ನೀಡುತ್ತೇವೆ. ಜುಲೈ ತಿಂಗಳಿನಿಂದಲೇ ಪಡಿತರ ಚೀಟಿದಾರರ ಖಾತೆಗೆ ಹಣ ವಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚುವರಿ ಅಕ್ಕಿ ಸಿಗುವವರೆಗೆ ಮಾತ್ರ ಹಣ ನೀಡುತ್ತೇವೆ. ಅಕ್ಕಿ ಸಿಕ್ಕ ನಂತರ ಸಂಪೂರ್ಣ ಅಕ್ಕಿಯನ್ನೇ ನೀಡುತ್ತೇವೆ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here