Home ಜಿಲ್ಲೆ ಶತಮಾನದ ರೈಲು ದುರಂತದಲ್ಲಿ ಮೃತರ ಗುರುತು ಪತ್ತೆಗೆ ಡಿಎನ್‌ಎ ಟೆಸ್ಟ್

ಶತಮಾನದ ರೈಲು ದುರಂತದಲ್ಲಿ ಮೃತರ ಗುರುತು ಪತ್ತೆಗೆ ಡಿಎನ್‌ಎ ಟೆಸ್ಟ್

ಒಡಿಶಾ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಅನೇಕರು ಕಂಬನಿ ಮಿಡದಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಲವರು ಪರಿಹಾರವನ್ನು ನೀಡಿದ್ದಾರೆ. ಇನ್ನೂ ಕೂಡ ಕೆಲವು ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆ ಮೃತರ ಗುರುತನ್ನು ಕಂಡುಹಿಡಿಯಲು ಡಿಎನ್‌ಎ ಪರೀಕ್ಷೆ ಮಾಡಲು ನಿಧರಿಸಲಾಗಿದೆ.
ಹೌದು, ಬಾಲಸೋರ್‌ ನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ಸಂಬಂಧಿಕರು ತಮ್ಮವರ ಹುಡುಕಾಟವನ್ನು ಮುಂದುವರಸಿದ್ದಾರೆ. ಈ ನಡುವೆ ಭುವನೇಶ್ವರ ಮುನ್ಸಪಾಲ್‌ ಕಾಪೋರೇಷನ್‌ ಸಂದರ್ಶಕರಿಂದ ಸಂಗ್ರಹಿಸಿದ 30 ಡಿಎನ್‌ಎ ಮಾದರಿಗಳನ್ನು ನವದೆಹಲಿಯ ಏಮ್ಸ್‌ ಗೆ ಕಳುಹಿಸುವುದಾಗಿ ಹೇಳಿದೆ. ಈ ವರದಿಯನ್ನು ಪಡೆಯಲು 7ರಿಂದ 8ದಿನಗಳಾಗಬಹುದು ಎಂದು ಅಂದಾಜಿಸಲಾಗಿದೆ.
ಹಿನ್ನೆಲೆ: ಶುಕ್ರವಾರ ಸಂಭವಿಸಿದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 288ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 
Previous articleಗೃಹಲಕ್ಷ್ಮೀ ಯೋಜನೆ ಬಗ್ಗೆ ಮಹತ್ವದ ಸಭೆ: ಅರ್ಜಿ ಬಿಡುಗಡೆ
Next articleಆದಿಪುರುಷ್‌ ಸಿನಿಮಾ ನೋಡುಗರಿಗೆ ಇಲ್ಲಿದೆ ವಿಶೇಷ ಆಫರ್‌