
ಜೆರುಸೆಲಂ: ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ಹಿಜ್ಬುಲ್ಲಾ ಉಗ್ರರ ಕೇಂದ್ರ ಕಚೇರಿ ಮೇಲೆ ಶುಕ್ರವಾರ ಸಂಜೆ ಇಸ್ರೇಲ್ ಭಾರಿ ಮಟ್ಟದ ವಾಯುದಾಳಿ ನಡೆಸಿದೆ.
ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ನಂತರ ಈ ಭಾರಿ ದಾಳಿ ನಡೆದಿದೆ.
ಈ ದಾಳಿಯಲ್ಲಿ 4 ಕಟ್ಟಡಗಳು ಧ್ವಂಸಗೊಂಡಿವೆ ಹಾಗೂ ಬೈರೂತ್ನಲ್ಲಿ ಭಾರಿ ದಟ್ಟ ಹೊಗೆ ಆವರಿಸಿದೆ ಎಂದು ಖುದ್ದು ಇಸ್ರೇಲ್ ಹೇಳಿದೆ.
ಹಿಜ್ಬುಲ್ಲಾ ಉಗ್ರರ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಸೇನೆಗೆ ಸೂಚಿಸಿದ ಹೊತ್ತಿನಲ್ಲೇ, ಎದುರಾಳಿ ಬಣಕ್ಕೆ ಹೌತಿ ಉಗ್ರರ ಪ್ರವೇಶವಾಗಿರುವುದು ಯುದ್ಧವನ್ನು ಇನ್ನಷ್ಟು ತೀವ್ರ, ಭೀಕರಗೊಳಿಸುವ ಆತಂಕ ಹುಟ್ಟುಹಾಕಿದೆ.
ಹೌತಿ ಉಗ್ರರು ಯೆಮೆನ್ನಲ್ಲಿ ನೆಲೆಸಿರುವರಾದರೂ ಅವರಿಗೆ ಇರಾನ್ ಬೆಂಬಲ ಕೂಡಾ ಇದೆ. ಹೌತಿ ಉಗ್ರರನ್ನು ವಿವಿಧ ರೀತಿಯ ಯುದ್ಧಕಲೆಯಲ್ಲಿ ನಿಪುಣರನ್ನಾಗಿ ಮಾಡಲು ಹಿಜ್ಬುಲ್ಲಾ ಉಗ್ರರು ಮೊಹಮ್ಮದ್ ಸ್ರುರ್ನನ್ನು ಯೆಮನ್ಗೆ ಕಳುಹಿಸಿಕೊಟ್ಟಿದ್ದರು. ಇದೀಗ ಆತನನ್ನೇ ಇಸ್ರೇಲ್ ಸಾಯಿಸಿದ ಕಾರಣ ಸಿಟ್ಟಿಗೆದ್ದ ಹೌತಿ ಉಗ್ರರು, ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ.
ಈ ನಡುವೆ ಲೆಬನಾನ್ ಮೇಲಿನ ದಾಳಿ ನಿಲ್ಲಿಸಿ 21 ದಿನಗಳ ಕದನ ವಿರಾಮ ಘೋಷಿಸಿರುವ ಅಮೆರಿಕ ಸೇರಿದಂತೆ ಹಲವು ದೇಶಗಳು ನೀಡಿದ್ದ ಸಲಹೆಯನ್ನು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ.
