Home ಸುದ್ದಿಗಳು ಕೆಂಪು ಉಗ್ರರ ಯುಗಾಂತ್ಯ: ಶರಣಾಗಲಿದ್ದಾನೆ ನಕ್ಸಲ್ ಕೋಟೆಹೊಂಡ ರವೀಂದ್ರ

ಕೆಂಪು ಉಗ್ರರ ಯುಗಾಂತ್ಯ: ಶರಣಾಗಲಿದ್ದಾನೆ ನಕ್ಸಲ್ ಕೋಟೆಹೊಂಡ ರವೀಂದ್ರ

0
ಕೆಂಪು ಉಗ್ರರ ಯುಗಾಂತ್ಯ: ಶರಣಾಗಲಿದ್ದಾನೆ ನಕ್ಸಲ್ ಕೋಟೆಹೊಂಡ ರವೀಂದ್ರ

ಚಿಕ್ಕಮಗಳೂರು: ಇಂದು (ಶನಿವಾರ) ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ನಕ್ಸಲ್ ಕೋಟೆಹೊಂಡ ರವೀಂದ್ರ ಶರಣಾಗಲಿದ್ದಾನೆ.

ಈ ಮೂಲಕ ಕರ್ನಾಟಕದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗುತ್ತಿದೆ.

ರವೀಂದ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನು. ಕಳೆದೊಂದು ದಶಕದಿಂದ ಈತ ಭೂಗತನಾಗಿದ್ದ.

ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ.

ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಸಹ ನಾಳೆ (ಭಾನುವಾರ) ಪೊಲೀಸರ ಮುಂದೆ ಶರಣಾಗಲು ತಯಾರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಯುಗ ಕೊನೆಯಾಗಲಿದೆ.

 

LEAVE A REPLY

Please enter your comment!
Please enter your name here